Sunday, March 18, 2007

ನಾಳೆ ನಮ್ಮದು

ಗುರುರಾಜ್ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೆರಡು ದಿನಗಳ ತನಕ ತೀವ್ರ ನಿಗಾ ವಿಭಾಗ (ICU)ದಲ್ಲಿದ್ದು, ರವಿವಾರ ಸಾಮಾನ್ಯ ವಿಭಾಗಕ್ಕೆ ವರ್ಗಾವಣೆ ಆಗಬಹುದು. ರವಿವಾರ ಗುರುರಾಜನನ್ನು ಭೇಟಿಯಾಗುವ ಇಚ್ಛೆಯಿದ್ದಲ್ಲಿ ದಯವಿಟ್ಟು ತಿಳಿಸಿ.

ಗುರುರಾಜ್ ಚಿಕಿತ್ಸೆಯ ಮುನ್ನ

ಗೆಳೆಯ ಸಂತೋಷನ ಅವಿರತ ಯತ್ನ, ವೈಯಕ್ತಿಕ ಕಾಳಜಿ, ನಿಮ್ಮೆಲ್ಲರ ಪ್ರೋತ್ಸಾಹ ಈ ಯಶಸ್ಸಿನ ಕಾರಣ. ನಿಮ್ಮ ಬೆಂಬಲಕ್ಕೆ ನಾವು ಆಭಾರಿಗಳು.

ನಿನ್ನೆಗಳ ನೆನಪುಗಳಲ್ಲಿ ಕರಗದೆ, ನಾಳೆಗಳ ಕನಸುಗಳಲ್ಲಿ ಮೈಮರೆಯದೆ, ವರ್ತಮಾನದಲ್ಲಿ ಬದುಕೋಣ. ನಾಳೆಗಳು ನಿನ್ನೆಗಳಾಗುವ ಮುನ್ನ, ಕನಸುಗಳ ಜಾತ್ರೆ ಬರಿದಾಗುವ ಮುನ್ನ, ಅವುಗಳನ್ನು ನನಸಾಗಿಸೋಣ. ನಾವು ಕ್ಷಣ ಕ್ಷಣವೂ ಬದುಕೋಣ ಮತ್ತು ಸುಂದರ ನಾಳೆಗಳನ್ನು ಕಟ್ಟೋಣ.


ನಾಳೆ ನಮ್ಮದು.

No comments: